Followers

Thursday, June 21, 2018

ನನ್ನ ಬಗ್ಗೆ

ನಾನು ಬರಹಗಾರನಲ್ಲ ನಾನು ಬರೆದದ್ದು ಬರಹಗಳೂ ಅಲ್ಲ ಇವು ಬರಿ ಮನಸಿನ ಮಾತುಗಳು ಕಾರಭಾರಿಯ ಕನಸುಗಳು 

ನನ್ನ ಬಗ್ಗೆ ಒಂದಿಷ್ಟು 

ಹೆಸರು:
ರಾ ದೇ ಕಾರಭಾರಿ (ನಿಮಗೆ ಇರುವ ಮುಖ ಪರಿಚಯ)
ವೆಂಕಟೇಶ (ನನ್ನವರು ನನ್ನ ಪ್ರೀತಿಯಿಂದ ಕರೆಯುವುದು)

ಉರು: 
ಹುಟ್ಟಿದ್ದು ಗಂಡು ಮೆಟ್ಟಿನ ನಾಡು ಕರ್ನಾಟಕದ "ಗದಗ" 
ಮದುವೆಯಾಗಿದ್ದು ಉತ್ತರ ಕರ್ನಾಟಕ ಬಾಗಲಕೋಟ ಪಟ್ಟಣದ ಮತಾಂತರದ ರಕ್ಕಸಿ "ಮಂಜುಳಾ"ಳನ್ನು 
ಹೊಟ್ಟೆಪಾಡಿಗೆ ಹೋಗಿ ಇಳಿದುಕೊಂಡಿದ್ದೆ ತುಳು ನಾಡು "ಮಂಗಳೂರು" ರಿನಲ್ಲಿ
ಆದ್ರೆ ತುಳು ಅರ್ತ ಆಪುಜಿ 
ಹೆಚ್ಚು ಹೊಟ್ಟೆ ಹಸಿವು ಆಗಿದ್ದಕ್ಕೆ ಹೊಗಿದ್ದು ಏಳು ಸಮುದ್ರದಾಚೆಯ "ದುಬೈ" 
ಮತಾಂತರವೆಂಬ ರಕ್ಕಸನ ಧಾಹಕ್ಕೆ ತುತ್ತಾಗಿ 
ಮನವರಿತ ಬಳಿಕ 
ಬಂದಿದ್ದು ಮತ್ತೆ ನನ್ನ ಜನ್ಮಭೂಮಿ 
ಗದಗ 

ಜಾತಿ:
ದೇವರು ಉಂಟುಮಾಡಿದ್ದು ಎರಡೇ ಜಾತಿ ಒಂದು ಗಂಡು ಇನ್ನೊಂದು ಹೆಣ್ಣು 
ಕುಲ: ಗೊತ್ತಿಲ್ಲ 
ನಕ್ಷತ್ರ: ತಿಳಿದಿಲ್ಲ
ಧರ್ಮ: ಭಾರತಿಯ 
ಆದರೆ ಮತಭ್ರಾಂತನಾಗಿ ಮಡದಿಯ ಮೋಹಕ್ಕೊಳಗಾಗಿ 
2006 ರಿಂದ 2013 ರ ವರೆಗೆ 
ಕ್ರೈಸ್ತ ಧರ್ಮಿಯನಾಗಿ ಧರ್ಮಭೊದಕನಾಗಿದ್ದೆ


ಕುಟುಂಬ:
ಹೆಂಡತಿಯಾಗಿದ್ದವಳು ಯೇಸುವಿನೊಂದಿಗೆ ಓಡಿಹೊದಳು
ಕುಟುಂಬಕ್ಕಿಂತ ಅವಳಿಗೆ ಕ್ರೈಸ್ತರ ಸಂಗ ಬೇಕಂತೆ
 ಅವಳು ಕದ್ದುಕೊಂಡು ಹೋದ ನನ್ನ ಸಂಪತ್ತು ಅಂದ್ರೆ
ಮಗ: ವಿನಿತ್ 
ಮಗಳು: ವಿನುತಾ 
ಅವಳು ಕದ್ದುಕೊಂಡು ಹೊಗಿದ್ದು ತುಂಬಾ ಅದಾವುದು ನನಗೆ 
ಅಮೂಲ್ಯವಲ್ಲ 

ಭಾಷೆ: ಕನ್ನಡ 

ವಿದ್ಯಾಭಾಸ: 
ವಾದ ಮಾಡೋರಿಗೆ ಪ್ರತಿವಾದ ಮಾಡೋವಷ್ಟು ಬುದ್ದಿ ಇದೆ 
ಕನಸಾಗಿಯೇ ಉಳಿದದ್ದು : 
MA/PhD  ಮಾಡಬೇಕೆಂಬ ಬಯಕೆ 

ಗುರಿ:
ತಪ್ಪಿಹೋಗಿದೆ 


ಪ್ರಶಸ್ತಿಗಳು:
ನಾಡಿನ ಎಷ್ಟೋ ಹುಡುಗಿಯರು ಪ್ರೀತಿಯಿಂದ ಕರೆಯುವ
 (ಅಣ್ಣ - ಅಪ್ಪಾಜಿ) 
ನನಗಿದೆ ಸಾಕು 

ಬರಹಗಳು:
ಬರೆದದ್ದು ತುಂಬಾ ಪತ್ರಿಕೆಗಳಲ್ಲಿ ಇನ್ನೂ ಬರಿತಾನೇ ಇದ್ದೆನೆ 
1998 ರಿಂದ ಬರಿತಾ ಇದ್ದೆನೆ  ವರ್ಷಗಳ ಬಳಿಕ ನೆನಪಿನಲ್ಲಿ ಉಳಿದದ್ದು ಸ್ವಲ್ಪ ಆದರೂ ಮುಸುಕು ಮುಸುಕು ನೆನಪಿನಂಗಳದಿಂದ 
ಸುಧಾ, ಮಯೂರ, ಕಸ್ತೂರಿ, ನವೋದಯ, ನಾಗರಿಕ, ಹಸಿರು ಕ್ರಾಂತಿ, 
ಚಕ್ರವರ್ತಿ, ಕ್ರೈಂ ನ್ಯೂಸ್, ಇನ್ನು ಅನೇಕ ಸರಿಯಾಗಿ ನೆನಪಿಲ್ಲ 

ಸಂಪಾದಕನಾಗಿ:
ವಜ್ರಾಯುಧ ವಾರ ಪತ್ರಿಕೆ 
ಜನಸೇವಾ ಪ್ರಣಾಳಿಕೆ
ಕನಸು ಮಕ್ಕಳ ಪತ್ರಿಕೆ

ಸ್ವಂತ ಪತ್ರಿಕೆ 

"ಮಹಾಪಾಪಿ" 

ಮತ್ತೊಂದು ಹೋಸ ಮತ್ರಿಕೆ ಆರಂಬಿಸುತ್ತಿದ್ದೆನೆ
"ಡಿಜಿಟಲ್ ಟೈಮ್ಸ ಆಪ ಇಂಡಿಯಾ" 
ದಿನ ಪತ್ರಿಕೆ
ರಾ ದೇ ಕಾರಭಾರಿ 
9663082890 / 8861994467

ಇನ್ನೂ ಡುಕುತ್ತಿದ್ದೆನೆ 
"ರೂಪವತಿ" 


Thursday, June 7, 2018

ಸಂಚಿಕೆ : 9

ರೂಪವತಿ : ಸಂಚಿಕೆ - 9

ರಾತ್ರಿಯ ಜಾವ ಹನ್ನೆರಡು ಘಂಟೆ ಮೀರಾ ಅಳುತ್ತ ಕುಳಿತಿದ್ದಾಳೆ ದೇವೇಂದ್ರ ಹೋಗಿ ನಾಲ್ಕು ದಿನವಾಯ್ತು ಇನ್ನು ಬಂದಿಲ್ಲ ಎಲ್ಲಿ ಹೋಗಿದ್ದಾರೋ ಒಂದು ಗೊತ್ತಿಲ್ಲ ಪತ್ರಿಕೆಯ ವಿಷಯವಾಗಿ ಕೆಲಸ ಇದೆ ಅಂತ ಹೇಳಿ ಹೋದವರು ಏನಾದರೋ ಗೊತೀಲ್ಲ,
ಪತ್ರಿಕಾ ಬಾತ್ಮಿದಾರರು ಸಹ ದೆವೆಂದ್ರನಿಗಾಗಿ ಯಲ್ಲಾ ಕಡೆ ಹುಡುಕುತ್ತಾ ಇದ್ದಾರೆ ದೇವೇಂದ್ರ ಕಾಣೆಯಾದ ಬಗ್ಗೆ ಗದಗ ನಗರ ಪೊಲೀಸರಿಗೂ ದೂರು ಕೊಡಲಾಗಿದೆ ಆದರೆ ದೇವೇಂದ್ರನ ಸುಳಿವೇ ಸಿಗುತ್ತಾ ಇಲ್ಲ, ಶಾಸಕರ ವರದಿ ಪ್ರಕಟವಾದ ದಿನದಿಂದಲೇ ದೇವೇಂದ್ರ ನಾಮತ್ತೆ ದೇವೇಂದ್ರನ ಅಪಹರಣವಾಯಿತಾ? ಕೊಲೆಯಾಯಿತಾ? ಏನಾಯ್ತು ದೇವೇಂದ್ರನಿಗೆ ಎಂವುದು ಒಂದು ಗೊತ್ತಾಗ್ತಾ ಇಲ್ಲ ಒಂದೇ ಒಂದು ತಂತಿ ಕೂಡ ಇಲ್ಲ ದೆವೆಂದ್ರನಿಂದ.
 ಅಮ್ಮ......ಅಪ್ಪ ಬಂದ್ರ ಪ್ರೇಮಳ ಮುಗ್ದ ಸ್ವರ ಕೇಳಿ ಸೋಪಾಮೇಲೆ ಒರಗಿಕೊಂಡು ಮಲಗಿದ್ದ ಮೀರಾ ಯಚ್ಚರಗೊಂಡು ಇನ್ನು ಬಂದಿಲ್ಲ ಮಗು ಇನ್ನೇನೋ ಬರಭಹುದು ಅಂತ ಹೇಳಿ ಅಡುಗೆ ಮನೆಗೆ ಹೋದಳು,
ವೆಂಕಟೇಶ್ ಎದ್ದು ಶಾಲೆಯ ನೋಟ್ಸ್ ಬರೆಯುತ್ತ ಕುಳಿತಿದ್ದ, ಅಡುಗೆ ಮನೆಗೆ ಹೋದ ಮೀರಾ ಏನಾದ್ರೋ ಅಡುಗೆ ಮಾಡಬೇಕು ಅಂತ ನೋಡುತ್ತಾಳೆ ಆದ್ರೆ ಏನು ಇಲ್ಲ ಹಿಟ್ಟು ನಿನ್ನೆಗೆ ಖಾಲಿಯಾಗಿದೆ ದೆವೆಂದ್ರನೇ ಮನೆಯ ಸಂತೆ ಮಾಡುತ್ತಿದ್ದ ಹಣದ ವ್ಯಾವಹಾರವೆಲ್ಲ ದೇವೇಂದ್ರನ ಕೈಯಲ್ಲೇ ಇರುವ ಕಾರಣ ದೇವೇಂದ್ರ ಒಂದೇ ಒಂದು ದಿನ ಮನೇಲಿ ಇಲ್ಲ ಅಂದ್ರೆ ಮನೆಯ ಸ್ತಿತಿ ಚಿಂತಾಜನಕವಾಗುತ್ತಾ ಇತ್ತು. ಅಮ್ಮ ಹಸಿವು ಆಗ್ತಾ ಇದೆ ಅಂತ ಪ್ರೇಮ ಅಳಲು ಆರಂಬಿಸಿದಳು ಅದನ್ನು ನೀಡಿದ ತಾಯಿ ಇರುವ ಸ್ವಲ್ಪ ಹಿಟ್ಟನ್ನೇ ಅದರಲ್ಲಿ ನೀರು ಮತ್ತು ಉಪ್ಪು ಹಾಕಿ ಕುಡಿಸಿ ಕೊಟ್ಟಳು, ಈಗ ಹಿಟ್ಟೆನೋ ಮಾಡಿ ಕೊಟ್ಟೆ ಆದರೆ ಮದ್ಯಾನ ರಾತ್ರಿ ಏನು ಮಾಡೋದು ಅಂತ ಚಿಂತಿಸುತ್ತಾ ಅಳುತ್ತ ಸುಮ್ಮನೆ ಕುಳಿತುಕೊಂಡಳು ಮೀರಾ
ವೆಂಕಟೇಶ್ ಎದ್ದು ತಂಬಿಗೆ (ಕೊಡ) ಹಿಡಿದುಕೊಂಡು ನಿರಿಗೆ ಹೋರಟ ರೈಲ್ವೆ ಸ್ಟೇಷನ್ ಗೆ ಬೆಟಗೇರಿ ಜನಕ್ಕೆ ಕುಡಿಯಲು ಧಾರಾಳವಾಗಿ ನೀರು ದೊರೆಯುವ ಒಂದೇ ಒಂದು ಸ್ಥಳ, ರೈಲ್ವೆ ಸ್ಟೇಷನ್ ತಲುಪುತ್ತಲೇ ವೆಂಕಟೇಶ್ ಸರಸರನೇ ಗೊದಾಮಿನತ್ತ ಹೆಜ್ಜೆ ಹಾಕಿದ ಅವನ ಎಣಿಕೆ ಸರಿ ಇತ್ತು ರಾಶಿ ರಾಶಿಯಾಗಿ ಚಲ್ಲಿತ್ತು ಅಕ್ಕಿ, ಅತೀವ ಸಂತಸಗೊಂಡ ವೆಂಕಟೇಶ್ ಅಕ್ಕಿಯನ್ನು ನೀರಿಗಾಗಿ ತಂದಿದ್ದ ಬಿಂದಿಗೆಯಲ್ಲಿ ತುಂಬಿಸಿಕೊಳ್ಳಲು ತೊಡಗಿದ ಸುತ್ತಲೂ ದೃಷ್ಟಿಸುತ್ತ ಬತ್ತ ತುಂಬುವ ಕಾರ್ಯದಲ್ಲಿ ತೊಡಗಿದ ವೆಂಕಟ್ ಹಿಂದಿರುಗಿಯೂ ನೋಡದೆ ಅಕ್ಕಿಯನ್ನು ತಂಬಿಗೆಯಲ್ಲಿ ತುಂಬಿಸುತ್ತಾ ಇದ್ದಾನೆ ಸಡನ್ ಆಗಿ ಯಾರೋ ಜೋರಾಗಿ ಕಟ್ಟಿಗೆಯಿಂದ ಹೊಡೆದ ಅನುಭವ ಹೆದರಿ ತಿರುಗಿ ನೋಡಿದ ಅಷ್ಟೇ ಅಧುರಿಹೋದ ವೆಂಕಟೇಶ್. RPF ಪೋಲಿಸ್ ಬೆತ್ತವನ್ನು ಹಿಡಿದು ಮತ್ತೊಮ್ಮೆ ಹೊಡೆಯಲು ಮುಂದೆ ಬಂದ ವೆಂಕಟೇಶ್ ಅಳಲು ಅಂಗಲಾಚಲು ಆರಂಬ ಮಾಡಿದ ಎಷ್ಟು ಬೇಡಿಕೊಂಡರೂ ಕೇಳದ RPF ಪೋಲಿಸ್ ವೆಂಕಟ್ ನನ್ನು ರೈಲ್ವೆ ಪೋಲಿಸ್ ಸ್ಟೇಷನ್ ಗೆ ಕರೆದೊಯ್ದು ಕೂಡಿಹಾಕಿದರು,
ವೆಂಕಟೇಶ್ ಅಳುತ್ತಲೇ ಇದ್ದಾನೆ ಏನು ಮಾಡಬೇಕು ಅನ್ನೋದೇ ಗೊತ್ತಾಗುತ್ತಾ ಇಲ್ಲ ಶಾಲೆಯ ಸಮಯ ಮಿರಿ ಹೋಯಿತು ಆ ದಿನ ಶಾಲೆಗೇ ಹೋಗಲು ಸಾದ್ಯವಿಲ್ಲ ಸುಮ್ಮನೆ ಒಂದು ಮೂಲೆಯಲ್ಲಿ ಕುಳಿತುಕೊಂಡ ವೆಂಕಟೇಶ್.
ಸಮಯ ತನ್ನ ಪಾಡಿಗೆ ಸಾಗುತ್ತಲೇ ಇದೆ ಮದ್ಯಾನ 1 ಘಂಟೆ. ಮನೆಯಲ್ಲಿ ಮೀರಾ ಜೋರಾಗಿ ಅಳುತ್ತ ಇದ್ದಾಳೆ ಇತ್ತ ಗಂಡ ಪತ್ತೆ ಇಲ್ಲ ಎನಾದನೋ ಗೊತ್ತಿಲ್ಲ ನೀರಿಗೆ ಹೋದ ಮಗ ಕೂಡ ಮದ್ಯಾನ ಆದರೂ ಪತ್ತೆ ಇಲ್ಲ, ತಾಯಿ ಕರುಳು ಹಿಂಡಿದ ಅನುಭವ. ಮಗನನ್ನು ಹುಡುಕಲು ಹೊರಗೆ ಹೋಗಬೇಕು ಅಂದ್ರೆ ಆಗೋಲ್ಲ ಹೊರಗೆ ಹೋದ ವಿಷಯ ಗಂಡನಿಗೆ ಗೊತ್ತಾದ್ರೆ ಕೊಂದು ಬಿಡುತ್ತಾನೆ. ಏನು ಮಾಡಬೇಕು ಅಂತ ತಿಳಿಯದೇ ಕಿಟಕಿಯಿಂದ ಪಕ್ಕದ ಮನೆಯ ಹುಡುಗನೊಬ್ಬನನ್ನು ಕೂಗಿ ಕರೆದು ರೈಲ್ವೆ ಸ್ಟೇಷನ್ ಗೆ ಹೋಗಿ ಸ್ವಲ್ಪ ವೆಂಕಟೇಶ್ ನನ್ನು ಹುಡುಕಿ ಬಾ ಬೆಳಿಗ್ಗೆ ಹೋದವ ಇನ್ನು ಬಂದಿಲ್ಲ ಎಂದು ಬೇಡಿಕೊಂಡಳು, ಪಾಪ ಹುಡುಗ ವೆಂಕಟೇಶ್ ನನ್ನು ಹುಡುಕಲು ಹೋರಟ.
 ರೈಲ್ವೆ ಪೋಲಿಸ್ ಸ್ಟೇಷನ್ ಹೊರಗಿನಿಂದ ಬಂದ ಇನ್ಸ್ಪೆಕ್ಟರ್ ವೆಂಕಟೇಶ್ ನನ್ನು ನೋಡಿ ಮಾತಾಡಿಸಿದ. ವೆಂಕಟೇಶ್ ನ ಕ್ಲಾಸ್ ಮೆಟ್ ಒಬ್ಬರ ತಂದೆ ಇನ್ಸ್ಪೆಕ್ಟರ್ ವೆಂಕಟೇಶ್ ನನ್ನು ಕೆಲವು ಬಾರಿ ನೋಡಿದ್ದ. ನಡೆದ ಸಂಗತಿ ಏನು ಅಂತ ತಿಳಿದು ಮತ್ತೊಮ್ಮೆ ಹೀಗೆ ಮಾಡಬೇಡ ಅಂತ ಹೇಳಿ ಮನೆಗೆ ಕಳಿಸಿಬಿಟ್ಟ.
ಸಂತೋಷಗೊಂಡ ವೆಂಕಟೇಶ್ ಮನೆಯತ್ತ ಹೆಜ್ಜೆ ಹಾಕಿದ ಬರುವಾಗ ಮತ್ತೆ ರೈಲ್ವೆ ಗುದಾಮ ದಿಂದಲೇ ಬರುತ್ತಿರುವಾಗ ರಾಶಿ ರಾಶಿ ಚಲ್ಲಿರುವ ಅಕ್ಕಿಯನ್ನು ನೋಡಿ ಮತ್ತೆ ಬಿಂದಿಗೆಯಲ್ಲಿ ತುಂಬಿಸಿಕೊಳ್ಳಲು ತೊಡಗಿದ...

ಮುಂದಿನ ಸಂಚಿಕೆಯಲ್ಲಿ

Tuesday, May 29, 2018

ರೂಪವತಿ : ಸಂಚಿಕೆ - 8

ರೂಪವತಿ : ಸಂಚಿಕೆ - 8

ದೇವೇಂದ್ರ ಎದ್ದು ಸ್ನಾನ ಮಾಡಿ ದೇವರ ಕೋಣೆಗೆ ಹೋದ ಪೂಜೆ ಮುಗಿಸಿ ಹೊರಬರುವ ಹೊತ್ತಿಗೆ ಬಾತ್ಮಿದಾರರು ಮನೆಯಲ್ಲಿ ಬಂದು ದೇವೇಂದ್ರನ ದಾರಿ ಕಾಯುತ್ತಾ ಇದ್ದರು ನಿನ್ನೆ ಕುಡಿತದ ನಶೆ ಹೆಚ್ಚಾಗಿ ಮಲಗಿದ್ದು ಯ ಚ್ಚರವಾಗಿದ್ದು ಸರಿ ಮದ್ಯಾನ 12 ರ ಸುಮಾರಿಗೆ. ದೇವರ ಕೋಣೆಯಿಂದ ಹೊರಬಂದು ತನ್ನ ಚೇರ್ ಮೇಲೆ ಕುಳಿತು ತುಟಿಗೆ ಸಿಗರೆಟ್ ಅಂಟಿಸಿ ಬಾತ್ಮಿದಾರರ ಜೊತೆ ಮಾತಿಗಿಳಿದ (ಬಾತ್ಮಿದಾರ) ದೇವೇಂದ್ರ ರವರೇ ಮುಂಜಾನೆಯಿಂದ ಇಡಿ ಜಿಲ್ಲೆಯ ಯಲ್ಲ ಪುಸ್ತಕ ಮಳಿಗೆಗಳಿಂದ ಪತ್ರಿಕೆಗಳು ಒಂದು ಉಳಿಯದಂತೆ ಮಾರಾಟವಾಗಿವೆ (ದೇವೇಂದ್ರ) ತುಂಬಾ ಸಂತೋಷದ ಸಂಗತಿ ಜಿಲ್ಲೆಯಲ್ಲಿ ಮೊದಲ ಬಾರಿ ಒಂದು ಚಿಕ್ಕ ಪತ್ರಿಕೆಯ ಸಾಧನೆ ಹಃ ಹಃ ಹಃ (ಬಾತ್ಮಿದಾರ) ಆದರೆ ಮತ್ತೊಂದು ವಿಷಯ ಯಲ್ಲ ಪ್ರತಿಗಳು ಮಾರಾಟವಾಗಿದ್ದರೂ ತುಂಬಾ ಜನರಿಗೆ ವಿಷಯ ಗೊತ್ತಾಗಿಲ್ಲ (ದೇವೇಂದ್ರ) ಇದು ಹೇಗೆ ಸಾದ್ಯ (ಯಲ್ಲ ಪುಸ್ತಕ ಮಳಿಗೆಗಳಿಂದ ಇರುವ ಯಲ್ಲ ಪ್ರತಿಗಳು ಒಬ್ಬನೇ ವ್ಯಕ್ತಿ ಕೊಂಡು ಹೋದ ಅಂತ ನಮಗೆ ಮಾಹಿತಿ ಬಂದಿದೆ, ಪತ್ರಿಕೆಯಲ್ಲಿ ಬಂದ ಶಾಸಕರ ವರದಿ ಜನರಿಗೆ ಗೊತ್ತಾಗಿ ಓದಬೇಕು ಅಂತ ಪ್ರತಿಗಳನ್ನು ಹುಡುಕುತ್ತಾ ಇದ್ದಾರೆ ಆದರೆ ಪ್ರತಿಗಳು ಸಿಗುತ್ತಾ ಇಲ್ಲ. ಮರು ಮುದ್ರಣವಾಗುತ್ತಾ ಇದೆ ಇನ್ನು ಅರ್ದ ಘಂಟೆಯಲ್ಲಿ ಪ್ರತಿಗಳು ಮುದ್ರನಗೊಳ್ಳುತ್ತೆ (ದೇವೇಂದ್ರ) ಶಹಬ್ಬಾಸ್ ಒಳ್ಳೆ ಕೆಲಸ ಮಾಡಿದ್ರಿ ಪತ್ರಿಕೆ ಮತ್ತೆ ಯಲ್ಲ ಮಳಿಗೆಗಳಿಗೂ ಕಳಿಸಿಬಿಡಿ (ಬಾತ್ಮಿದಾರ) ಆದ್ರೆ ದೇವೇಂದ್ರ ರವರೆ ಆ ವ್ಯಕ್ತಿ ಮತ್ತೆ ಬಂದು ಪತ್ರಿಕೆ ಕೊಂಡು ಹೋಗಿ ಬಿಟ್ಟರೆ ಏನು ಮಾಡೋದು (ದೇವೇಂದ್ರ) ಅದು ನಿಜ ಮುದ್ರಣಗೊಂಡ ಪ್ರತಿಗಳನ್ನು ಮಳಿಗೆಗಳಿಗೆ ಸಾಗಿಸಿ ಮತ್ತೆ ಮರುಮುದ್ರಣ ಮಾಡಿ ಮತ್ತೊಮ್ಮೆ ಮರು ಮುದ್ರಣಗೊಂಡ ಪ್ರತಿಗಳನ್ನು ನೇರ ಇಲ್ಲಿಗೆ ತಗೆದುಕೊಂಡು ಬನ್ನಿ ಏನಾದ್ರೋ ಆಲೋಚನೆ ಮಾಡೋಣ. ಬಾತ್ಮಿದಾರರು ದೇವೇಂದ್ರ ಸೂಚಿಸಿದ ಕೆಲಸದಲ್ಲಿ ತಲ್ಲಿನರಾಗಲು ಧಾವಿಸಿದರು ದೇವೇಂದ್ರ ಮತ್ತೊಂದು ಸಿಗರೇಟಿಗೆ ಬೆಂಕಿ ತಗುಲಿಸಿದ. ದೇವೇಂದ್ರ ತುಂಬಾ ಆಲೋಚನೆ ಮಾಡುತ್ತಾ ಇದ್ದಾನೆ ಪತ್ರಿಕೆ ಜನರ ಕೈಗೆ ತಲುಪಬೇಕಾದರೆ ಏನು ಮಾಡಬೇಕು ಅಯ್ಯೋ ಆಲೋಚನೆ ಮಾಡಿ ಮಾಡಿ ಸಾಕಾಯ್ತು ಸಿಗರೇಟಿನ ತುಂಡುಗಳು Ash Tray ನಲ್ಲಿ ತುಂಬುತ್ತಾ ಇದೆ ಸಿಗರೇಟಿನ ಹೋಗೆ ಕೋಣೆತುಂಬಾ ತುಂಬಿರುವ ಕಾರಣ ಕೋಣೆ ಮಂದವಾಗಿ ಕಾಣುತ್ತಾ ಇದೆ ದೇವೇಂದ್ರ ಏನೋ ಆಲೋಚನೆ ಮಾಡಿಕೊಂಡು ಜಗತ್ತನ್ನೇ ಗೆದ್ದುಕೊಂದಂತೆ ಗಹಗಹಿಸಿ ನಗುತ್ತ ಪೇಪರ್ ಪ್ಯಾಡ್ ಮೇಲೆ ಏನೋ ಬರೆಯಲು ಆರಂಬ ಮಾಡಿದ ಅರ್ದ ಘಂಟೆ ಬರೆದಾದ ಮೇಲೆ ಬರೆದ ಆ ಕಾಗದವನ್ನು ದಿಟ್ಟಿಸಿ ನೋಡಿ “ಗದಗ ಜಿಲ್ಲಾ ಪತ್ರಿಕಾ ರಂಗದಲ್ಲೊಂದು ಹೋದ ಪರ್ವದ ಆರಂಬ” ಮತ್ತೆ ನಕ್ಕು ಮತ್ತೊಂದು ಸಿಗರೇಟು ಅಂಟಿಸಬೇಕು ಅನ್ನುವಷ್ಟರಲ್ಲಿ ಮನೆ ಮುಂದೆ ವಾಹನವೊಂದು ಬಂದು ನಿಂತಿತು. ದೇವೇಂದ್ರ ವಾಹನದತ್ತ ದೃಷ್ಟಿ ಹಾಯಿಸಿದ ನಮ್ಮ ಕಾರ್ಯಾಲಯದ ಸಿಬ್ಬಂದಿ ಪ್ರಕಟಗೊಂಡ ಮೂರನೇ ಮುದ್ರಣದ ಪ್ರತಿಗಳ ಬಾಕ್ಸ್ ಅನ್ನು ತಂದಿದ್ದರು. ದೇವೇಂದ್ರ ಸಿಗರೇಟನ್ನು ಬಿಸ್ಹಾಕಿ ಹೊರಬಂದ ಜೊತೆಗೆ ಬಂದಿದ್ದ ಬಾತ್ಮಿದಾರರು ಏನೋ ಸಾಧನೆ ಮಾಡಿ ಜಯಿಸಿದ ಹಾಗೆ ಮಂದಹಾಸದಿಂದ ಇದ್ದರು, (ಬಾತ್ಮಿದಾರ) ದೇವೇಂದ್ರ ರವರೆ ಪರ್ತಿಕೆ ಎರಡನೇ ಮುದ್ರಣ ಮತ್ತೆ ಯಲ್ಲ ಮಳಿಗೆಗಳಿಗೆ ಹೋಗಿದೆ ಮೂರನೇ ಮುದ್ರಣ ಇಲ್ಲಿ ತಂದಿದ್ದೇವೆ ಈಗ ಹೇಳಿ ಇದನ್ನು ಏನು ಮಾಡೋಣ? (ದೇವೇಂದ್ರ) ನೋಟ್ ಪ್ಯಾಡ್ ನಲ್ಲಿ ಬರೆದುಕೊಂಡ ಸಂಗತಿಗಳನ್ನು ಮತ್ತೊಮ್ಮೆ ನೋಡಿ ಮುಗುಳ್ನಕ್ಕು ವರದಿಗಾರರಿಗೆ ತೋರಿಸಿದ ಕೆಂಪು ಇಂಕ್ ನಿಂದ ನಾಟ್ ಪ್ಯಾಡ್ ಮೇಲೆ ಬರೆದಿತ್ತು “ಗದಗ ಜಿಲ್ಲಾ ಪತ್ರಿಕಾ ರಂಗದಲ್ಲೊಂದು ಹೋದ ಪರ್ವದ ಆರಂಬ” (ಬಾತ್ಮಿದಾರ) ದೇವೇಂದ್ರ ರವರೆ ತುಂಬಾ ಸಂತೋಷ ಆದರೆ ಇದು ಹೇಗೆ ಅಂತ ಸ್ವಲ್ಪ ಬಿಡಿಸಿ ಹೇಳಿ (ದೇವೇಂದ್ರ) ಇವತ್ತು ಯಲ್ಲ ಜನರಿಗೆ ಪತ್ರಿಕೆ ಸೇರೋ ಹಾಗೆ ನಾವೆಲ್ಲಾ ಸೇರಿ ಒಂದು ಹೊಸ ಸಾಹಸ ಮಾಡಬೇಕು, ಪ್ರತಿಯೊಬ್ಬರೂ ಪರ್ರಿಕೆಗಳನ್ನು ಹಾಕ್ಕೊಂಡು ಇಡಿ ಜಿಲ್ಲೆಯ ಪ್ರತಿಯೊಂದು ಪಾನ್ ಶಾಪ್ (ಬಿಡಾ ಅಂಗಡಿ) ಗಳಿಗೆ ಕೊಡಬೇಕು, ಇಲ್ಲಿವರೆಗೂ ನಾವು ಪ್ರತಿ ಮಾರಾಟಕ್ಕೆ 1೦% ಕಮಿಷನ್ ಕೊಡುತ್ತಾ ಇದ್ದೆವು ಈಗ ಅದನ್ನು 25% ಹೆಚ್ಚು ಮಾಡಿ ಪ್ರತಿ ಬಿಡಾ ಅಂಗಡಿಗಳಿಗೆ ಕೊಡಿ, ಪ್ರತಿಗಳು ಮಾರಾಟವಾದ ಬಳಿಕ ಹಣ ಕೊಡೋಕೆ ಹೇಳಿ ಪತ್ರಿಕೆ ತಾನಾಗೇ ಜನರ ಬಳಿಗೆ ತಲುಪುತ್ತೆ. ಇಡಿ ಜಿಲ್ಲೆಯನ್ನು ಜಾಲಾಡಿ ಪ್ರತಿಗಳನ್ನು ಕೊಂಡು ನಾಶಮಾಡೋದು ಆಗದ ಮಾತು ಹಾಗೊಂದು ವೇಳೆ ಅಂತಹ ಸಾಹಸ ಮಾಡಿದರೂ ಸಹ ಎಲ್ಲಿ ಎಲ್ಲಿ ಪ್ರತಿಗಳು ಮಾರಾಟವಾಗುತ್ತಾ ಇದೆ ಅಂತ ಆಲೋಚಿಸುವುದರೊಳಗೆ ಪತ್ರಿಕೆಗಳನ್ನು ಜನ ಓದಿರುತ್ತಾರೆ (ಬಾತ್ಮಿದಾರ) ದೇವೇಂದ್ರ ರವರೆ ಒಳ್ಳೆ ಸೂಚನೆ ಖಂಡಿತ ಈ ತಂತ್ರ ಕೆಲಸ ಕೊಡುತ್ತೆ (ದೇವೇಂದ್ರ) ಹಾಗಾದ್ರೆ ಇನ್ನು ತಡ ಮಾಡಬೇಡಿ ಹೋಗಿ ನಿಮಗೆ ಬೇಕಾದವರನ್ನು ಸೇರಿಸಿ ಅವರ ಜೊತೆ ಸಹ ಪತ್ರಿಕೆ ಹಂಚಿಕೆ ಮಾಡೋಕೆ ಹೇಳಿ, ಸಮಯ ಬಂದರೆ ನಾಲ್ಕನೆಯ ಮುದ್ರಣ ಕೂಡ ಮಾಡೋಣ “ಕಾಳಿಂಗ ನಾಗ” ವಾರ ಪತ್ರಿಕೆ ಕೇವಲ ಜಿಲ್ಲೆಯಲ್ಲಷ್ಟೇ ಅಲ್ಲ ಇಡಿ ಕರ್ನಾಟಕಕ್ಕೆ ಸಿಂಹ ಸ್ವಪ್ನ ವಾಗಬೇಕು ದೇವೇಂದ್ರ ಸಿಗರೆಟ್ ತೆಗೆದು ತುಟಿಗಂಟಿಸಿ ಅದಕ್ಕೆ ಬೆಂಕಿ ತಗುಗಿಸಿದ. ಹೆಂಡತಿಯನ್ನು ಕೂಗಿ ಮೀರಾ.. ನನಗೆ ಸ್ವಲ್ಪ ಹೊರಗಡೆ ಕೆಲಸ ಇದೆ ನಾನು ಹೋಗಿ ಬರುವೆ ದೇವೇಂದ್ರ ಹೆಂಡತಿಯ ಉತ್ತರಕ್ಕೂ ಕಾಯದೆ ಸರಸರನೆ ಹೊರನಡೆದ ಸ್ವಪ್ನ ಬಾರ್ ಮನೆಯ ತುಂಬಾ ಸಮೀಪಕ್ಕೆ ಇರುವ ದೇವೇಂದ್ರನ ಇಷ್ಟದ ಸರಾಯಿ ಅಡ್ಡಾ, ದೇವೇಂದ್ರ ಕುಳಿತು ಒಂದು ಕ್ವಾಟರ್ ಓಲ್ಡ್ ಮಂಕ್ ಆರ್ಡರ್ ಮಾಡಿದ ಜೊತೆಗೆ ಒಂದು ಪ್ಯಾಕೆಟ್ ಚಾರ್ ಮಿನಾರ್, ಪಾಕೆಟ್ ನಲ್ಲಿ ಉಳಿದಿದ್ದ ಒಂದೇ ಸಿಗರೇಟಿಗೆ ಬೆಂಕಿ ತಗುಲಿಸಿ ಆಲೋಚನೆಯಲ್ಲಿ ಲಿನವಾದ, ಮುಂದಿನ ವಾರದ ಮುದ್ರಣಕ್ಕಾಗಿ ಹಾಟ್ ನ್ಯೂಸ್ ಯಾವುದು, ಈ ವಾರ ಶಾಸಕನ ಹಣೆಬರಹ ಗೊತ್ತಾಗುತ್ತೆ ಮುಂದಿನ ವಾರ.................... ಹೀಗೆ ಆಲೋಚನೆ ಮಾಡುತ್ತಿರುವಾಗಲೇ ಸರ್ವರ್ ಬಂದು ಗ್ಲಾಸ್ ಮತ್ತು ಸಿಸೆಯನ್ನು ಟೇಬಲ್ ಮೇಲಿಟ್ಟ.

ಮುಂದಿನ ಸಂಚಿಕೆಯಲ್ಲಿ

Sunday, May 27, 2018

ರೂಪವತಿ : ಸಂಚಿಕೆ - 7

ರೂಪವತಿ : ಸಂಚಿಕೆ - 7

ದೇವೇಂದ್ರ ಸರಸರನೆ ಬರುತ್ತಾ ಇದ್ದಾನೆ ಮನೆಗೆ ಹೋಗುವ ಲಗುಬಗೆಯಲ್ಲಿ ಸ್ಟೇಷನ್  ಒಂದು ಅಂಚಿನಲ್ಲಿ ತಟ್ಟನೆ ನಿಂತುಬಿಟ್ಟ ದೇವೇಂದ್ರನ ಮನಸಲ್ಲಿ ಏನೋ ಗೊಂದಲ ಏನು ಮಾಡಬೇಕು ಅಂತ ತಿಳಿಯದೆ ಅರ್ದ ಅಹಂತೆ ಅಲ್ಲೇ ನಿಂತ 3 ಸಿಗರೇಟನ್ನು ಸುಟ್ಟುಹಾಕಿದ ಕೊನೆಗೆ ಏನೋ ನಿರ್ದರಿಸಿಕೊಂಡು ಸರಸರನೆ ಪಕ್ಕದಲ್ಲೇ ಇದ್ದ ಸ್ವಪ್ನ ಬಾರ್ ನತ್ತ ಧಾವಿಸಿ ಮೇಜಿನಲ್ಲಿ ಕುಳಿತು ಆರ್ಡರ್ ಮಾಡಿದ “ಒಂದು ಕ್ವಾಟರ್ ಓಲ್ಡ್ ಮ೦ಕ್” ಮತ್ತೆ ಸಿಗರೇಟು ತೆಗೆದು ಅದಕ್ಕೆ ಬೆಂಕಿ ತಗುಲಿಸಿದ. ತಲೆಯಲ್ಲಿ ಪೂರ್ಣ ನಾಳೆ ಏನಾಗುತ್ತೋ ಅನ್ನೋ ಯೋಚನೆ ಮಗ ಹೇಗಿದ್ದಾನೋ ಅನ್ನೋ ತವಕ ಇದೆ ಯೋಚನೆಯಲ್ಲಿ ಬಾರ್ ಗೆ ಬಂದು ಕುಡಿಯಲು ಕುಳಿತುಕೊಂಡ. ಸಿಗರೇಟಿನ ಜೊತೆ ಸರಾಯಿ ಕುಡಿಯುತ್ತ ಕುಳಿತ ದೇವೇಂದ್ರ ಕುಡಿತದಲ್ಲೇ ಮಗ್ನನಾದ ಏನೇನೋ ಗುನುಗುಟ್ಟುತ್ತಾ ಇದ್ದಾನೆ ಒಬ್ಬನೇ ಮಾತಾಡ್ತಾ ಇದ್ದಾನೆ “ವೆಂಕಟ್ ಸಾರಿ ಕಣೋ ಮಗಾ ನಿನ್ನೆ ಇಡಿ ರಾತ್ರಿ ಕಾಡಿನಲ್ಲಿ ನಿನ್ನನ್ನು ಇಟ್ಟಿದ್ದೆ ನಾನು ಒಳ್ಳೆ ತಂದೆ ಅಲ್ಲ” I Love you ಕಣೋ ನೀನು ನನ್ನ ಪಾಲಿನ ಅದೃಷ್ಟದ ಹರಳು ನೀನು ಹುಟ್ಟಿದ ಮೇಲೆ ನಾನು ಪತ್ರಕರ್ತ, ಹೀಗೆ ಗುಣುಗುಟ್ಟುತ್ತಾ ಮತ್ತಷ್ಟು ಕುಡಿದ ತಟ್ಟನೆ ದೇವೇಂದ್ರನಿಗೆ ನೆನಪಾಗಿದ್ದು ಉಮಾ, ಹೇ ನನ್ನ ಮುದ್ದಿನ ರಾಣಿ ನಾ ನಿನ್ನ ನೋಡಬೇಕು ಕಣೆ ನಿ ನನಗೆ ಬೇಕೇ ಬೇಕು ನೀನಿಲ್ಲದೆ ನಾ ಬದುಕೊಲ್ಲ ನಂಗೆ ನೀನು ಬೇಕು ನಂಗೆ ನೀನು ಬೇಕು ನಂಗೆ ನೀನು ಬೇಕು ಐ ಲವ್ ಯೂ ಮೈ ಡಾರ್ಲಿಂಗ್...... ಹೀಗೆ ಗುಣಗುತ್ತುತ್ತಾ ಇದ್ದ ದೇವೇಂದ್ರನಿಗೆ ಯಾರೋ ಅಲ್ಲಾಡಿಸುತ್ತಿರುವ ಅನುಭವ.. ಹೇ ಯಾವನಲೇ ಅವನು........... ಸಾರ್ ತುಂಬಾ ಟೈಮ್ ಆಯಿತು ಬಾರ್ ಕ್ಲೋಸ್ ಮಾಡುತ್ತಾ ಇದ್ದೇವೆ ಹೋಗಿ ಮನೆಗೆ (ಬಾರ್ ಸರ್ವರ್ ನ ಸ್ವರ)... ಓಕೇ ಮೈ ಬಾಯ್ ಸರ್ವರ್ ಗೆ ಟಿಪ್ ಕೊಟ್ಟು ತೋರಾಡುತ್ತ ಅಲ್ಲಿಂದ ಮೇಲೆದ್ದ ದೇವೇಂದ್ರ ಮನೆ ಕಡೆ ಹೆಜ್ಜೆಹಾಕಿದ. ಬೆಳಿಗ್ಗೆ ಹೋದ ದೇವೇಂದ್ರ ಇನ್ನು ಮನೆಗೆ ಬರಲಿಲ್ಲ ರಾತ್ರಿ 12 ಆಗೋಕೆ ಬಂತು ಇನ್ನು ಮಲಗದೇ ದೇವೇಂದ್ರನ ದಾರಿ ಕಾಯುತ್ತ ಕುಳಿತಿದ್ದಾಳೆ ಮೀರಾ ದೇವೇಂದ್ರ ಕುಡಿತ ಬಿಟ್ಟ ಅನ್ನೋ ಸಂತೋಷ ಮನೆಮಾಡಿದೆ ಇನ್ನು ಉಟ ಸಹ ಮಾಡದೆ ಗಂಡನ ಜೊತೆಗೂಡಿ ಉಟ ಮಾಡಬೇಕು ಅಂತ ಮೀರಾ ಕಾಯುತ್ತಾ ಇದ್ದಾಳೆ ವೆಂಕಟೇಶನಿಗೆ ಸ್ವಲ್ಪ ಗುಣವಾಗಿದೆ ಮಲಗಿದ್ದಾನೆ ಪ್ರೇಮ ಮತ್ತು ಗಿರೀಶ ಕೂಡ ಮಗಗಿದ್ದಾರೆ ಗರ್ಬಿಣಿ ಮೀರಾ ಗಂಡನ ದಾರಿ ಕಾಯುತ್ತ ಹಾಗೆ ಕುಳಿತುಕೊಂದವಳು ಸ್ವಲ್ಪ ನಿದ್ರೆ ಬಂದಂತೆ ಸೋಫಾ ಮೇಲೆ ಸುಮ್ಮನೆ ವರಗಿಕೊಂದಿದ್ದಾಳೆ “ ಕಬಿನಾ ಕಬಿ ಕಹಿ ನಾ ಕಹಿ ಕೊಯಿನಾ ಕೊಯಿತೋ ಆಯೇಗಾ..... ಕಬಿನಾ ಕಬಿ” ಮೀರಾಳ ಕಿವಿಗೆ ಪಟ್ಟನೆ ಅಪ್ಪಳಿಸಿತು ಹಿಂದಿ ಸಂಗಿತದ ಕರ್ಕಷ ಧ್ವನಿ, ದೇವರೇ ಮೀರಾಳ ಪ್ರಾಣವೇ ಹೋದ ಅನುಭವ ಯಾಕೆಂದ್ರೆ ಇದು ಗಂಡನ ಸ್ವರ ಯಾವಾಗಲು ಕುಡಿದಾಗ ಗಂಡ ಕರ್ಕಷವಾಗಿ ಹಾಡುವ ಹಿಂದಿ ಸಂಗೀತ, ಕುಡಿತ ಬಿಡುತ್ತೇನೇ ಅನ್ನೋದು ಕೆಲವ ನಾಟಕ ಬಣ್ಣದ ಮಾತು ಅಂತ ಅಳಲು ಆರಂಬ ಮಾಡಿದಳು ಮೀರಾಳಿಗೆ ಅತಿವ ದುಕ್ಕವಾಗಿ ಕಣ್ಣಿರು ತಾನಾಗೇ ಇಳಿಯಲು ಆರಂಬವಾಯಿತು... ಹೊಯ್........ ಟಕ್ ಟಕ್ ಟಕ್ ಬಾಗಿಲು ಬಡಿಯುವ ಶಬ್ದ ದೇವೇಂದ್ರ ಬಾಗಿಲು ತಟ್ಟುತ್ತ ಇದ್ದ.. ಲೇ ಬೇಗನೆ ಬಾಗಿಲ ತಗೆ ಒಳಗೆ ಏನ್ ಮಾಡುತ್ತಾ ಇದ್ದೀಯ, ಯಾರಿದ್ದಾರೆ ಒಳಗೆ......ಹೇಯ್, ಅಳುತ್ತಿದ್ದ ಮೀರಾ ಕಣ್ಣು ಒರೆಸಿ ಬಂದು ಬಾಗಿಲು ತೆರೆಯೋದರೊಳಗೆ ದೇವೇಂದ್ರ ಚಿರಾಡಲು ಸುರು ಮಾಡಿಕೊಂಡ, ಅಪ್ಪನ ಸ್ವರ ಕೇಳುತ್ತಲೇ ಮಕ್ಕಳೆಲ್ಲ ನಿದ್ದೆಯಿಂದ ಯಚ್ಚರಗೊಂಡು ನಡುಗಲು ಸುರು ಮಾಡಿಕೊಂಡರು, ಮೀರಾ ಬಾಗಿಲು ತೆರೆಯುತ್ತಲೇ ಧಡಾರನೆ ಬಿದ್ದು ಹೊಡೆತ ಕಾಲಿನಿಂದ ಒದ್ದ ಹೊಡೆತಕ್ಕೆ ಕ್ಷಣ ಮೂರ್ಚೆ ಹೋದಂತೆ ಆಯಿತು ಮಿರಾಳಿಗೆ ದೊಡ್ಡ ಬಂಡೆಗಲ್ಲು ಯದೆಮೇಲೆ ಬಂದು ಅಪ್ಪಳಿಸಿದ ಅನುಭವ. ಯಾಕೆ ಬೇಗನೆ ಬಾಗಿಲು ತಗೆಯಲಿಲ್ಲ ಮನೆಯಲ್ಲಿ ಮತ್ತಾರು ಇದ್ದರು ಅನ್ನೋ ವಿಷಯವನ್ನು ಮುಂದಿಟ್ಟುಕೊಂಡು ದೇವೇಂದ್ರ ಮೀರಾಳಿಗೆ ಮನಬಂದಂತೆ ಥಳಿಸಿದ ಬಿಡಿಸಲು ಹೋದ ವೆಂಕಟೇಶನಿಗೆ ಸಹ ಒದೆತ ಬಿದ್ದಿತ್ತು ಪ್ರೇಮ ಮತ್ತು ಪುಟ್ಟ ಮಗು ಗಿರೀಶ ಕೂಡ ಹೊಡೆತಕ್ಕೆ ತತ್ತರಿಸಿ ಹೋಗಿದ್ದರು, ಮನೆ ರಣರಂಗವಾಗಿತ್ತು ಮನೆಯಲ್ಲಿ ಕಿರುಚಾಡುವ ಶಬ್ದ ಸುತ್ತಲು ಯಲ್ಲರಿಗೂ ಕೇಳಿಸಿದರೂ ಸಹ ಯಾರು ಬಿಡಿಸೋಕೆ ಬರೋಲ್ಲ ದಿನಾ ಸಾಯೋಗಿಗೆ ಅಳೋರು ಯಾರು ಎಂಬುದೇ ಜನರ ಆಲೋಚನೆಯಾಗಿತ್ತು. ಸಿಗರೇಟು ಹಚ್ಚಿಕೊಂಡು ಸೇದುತ್ತಿದ್ದ ದೇವೇಂದ್ರ ಮೀರಾಳ ದೇಹದ ಮೇಲೆ ಸಿಗರೆಟಿನಿಂದ ಸುಟ್ಟು ಹಾಕಿದ ಕಿಟಾರನೆ ಕಿರುಚಿಕೊಂಡಳು ಮೀರಾ. ಕಿರುಚಿ ನನ್ನ ಮರ್ಯಾದೆ ತೆಗೆತಿಯಾ ಅಂತ ಮತ್ತಷ್ಟು ಹೊಡೆದ... ಅಳುತ್ತ ಕುಳಿತುಕೊಂಡಿದ್ದರು ಮಕ್ಕಳು ತಾವು ಅಳುತ್ತಿರುವ ಶಬ್ದವೇ ಹೊರಬರಬಾರದು ಅಂತ ತುಂಬಾ ಯಚ್ಚರಿಕೆವಹಿಸಿ ಅಳುತ್ತಾ ಇದ್ದರು ಅಳುವ ಶಬ್ದ ಕೇಳಿದರೆ ಯಲ್ಲಿ ಅಪ್ಪ ಬಂದು ಹೊಡಿತಾನೆ ಅನ್ನೋ ಹೆದರಿಕೆ ಮಕ್ಕಳಿಗೆ, ಮೀರಾ ಒಂದು ಮೂಲೆಯಲ್ಲಿ ಕುಳಿತಿದ್ದಾಳೆ ಅಳುತ್ತಿದ್ದಾಳೆ ನರಳುತ್ತಿದ್ದಾಳೆ ಅದು ಶಬ್ದವಿಲ್ಲದ ನರಳಾಟ, ಕುಡಿತದ ಅಮಲಿನಲ್ಲಿ ಜೋರಾಗಿ ಚಿರಾಡುತ್ತಿದ್ದ ದೇವೇಂದ್ರ ಬಿದ್ದುಕೊಂಡ ನೆಲದಲ್ಲೇ ಮಲಗಿಬಿಟ್ಟ ಅಳುತ್ತ ಕುಳಿತುಕೊಂಡಳು ಮೀರಾ ತಾಯಿಯ ಯೇದೆಗೊರಗಿಕೊಂಡು ಮಕ್ಕಳು ಕೂಡ ಅಳುತ್ತ ಅಲ್ಲೇ ನಿದ್ದೆ ಹೋದವು.

ಮುಂದಿನ ಸಂಚಿಕೆಯಲ್ಲಿ

Saturday, May 26, 2018

ರೂಪವತಿ : ಸಂಚಿಕೆ - 6

ಕಾಳಿಂಗ ನಾಗ ಪತ್ರಿಕಾ ಕಾರ್ಯಾಲಯ ಪತ್ರಿಕೆ ಮುದ್ರಣ ಕಾರ್ಯದಲ್ಲಿ ಬಾತ್ಮಿದಾರರು ಮಗ್ನರಾಗಿದ್ದಾರೆ ಯಲ್ಲರಿಗೂ ಕುತೊಹಲ ಪತ್ರಿಕೆ ಪ್ರಕಟವಾದ ಕೂಡಲೇ ಜನರ ಪ್ರತಿಕ್ರಿಯೆ ಏನು ಒಬ್ಬ ಪ್ರಭಾವಿ ರಾಜಕೀಯ ವ್ಯಕ್ತಿಯ ಕುರಿತು ಸಂಚಲನವುಂಟು ಮಾಡುವ ಪ್ರಮುಖ ವರದಿ ಮುದ್ರಣಗೊಳ್ಳುತ್ತಾ ಇದೆ ಪತ್ರಿಕೆ ಪ್ರಭಾವದಿಂದ ಅಧಿಕ ಪ್ರಭಾವಕ್ಕೆ ಹೋಗುತ್ತೆ ಅನ್ನೋ ಉತ್ಸಾಹ ಯಲ್ಲಾ ಬಾತ್ಮಿದಾರರಲ್ಲೂ ಮನೆಮಾಡಿಕೊಂಡಿತ್ತು ಮುದ್ರಣಕಾರರು ಅಕ್ಷರ ಜೋಡಣಾ ಕಾರ್ಯದಲ್ಲಿ ಮಗ್ನರಾಗಿದ್ದರು. ಅದು ಚಲಿಗಾಳವಾದರೂ ಅವರು ಬೆವರುತ್ತಿದ್ದಾರೆ ನಾಳೆ ಏನಾಗುತ್ತೆ ಯಲ್ಲರಿಗೂ ಕಾಡುತ್ತಿರುವ ಯಕ್ಷಪ್ರಶ್ನೆ ಒಬ್ಬ ಸಾಮಾನ್ಯ ರಾಜಕೀಯ ವ್ಯಕ್ತಿ ಏಕಾಏಕಿ ಶ್ರೀಮಂತ ಆಗಿದ್ದು ಹೇಗೆ ? ಜನರ ಮುಂದೆ ಇರುವ ಉತ್ತರವಿಲ್ಲದ ಪ್ರಶ್ನೆಗೆ ದೇವೇಂದ್ರನ ಬಳಿ ಉತ್ತರವಿತ್ತು ಆ ಉತ್ತರ ಜನರ ಮುಂದೆ ಪ್ರದರ್ಷಿಸುವುದಕ್ಕಾಗಿ ದೇವೇಂದ್ರ ಸಿದ್ದತೆ ಮಾಡಿಕೊಂಡಿದ್ದ ಅದಕ್ಕೆ ಬೇಕಾಗುವ ಕೆಲವು ಭಾವಚಿತ್ರಗಳು ಒಬ್ಬರ ಬಳಿ ಇದ್ದವು ಆ ಭಾವಚಿತ್ರಗಳನ್ನು ಪಡೆದುಕೊಳ್ಳಲು ದೇವೇಂದ್ರ ಅಣ್ಣಿಗೇರಿ ಗ್ರಾಮಕ್ಕೆ ಬಂದಿದ್ದ ಅದೊಂದು ಚಿಕ್ಕ ಹಳ್ಳಿ ಗದಗ ಪಟ್ಟಣದಿಂದ ಸ್ವಲ್ಪ ದೂರದಲ್ಲಿರುವ ಆ ಹಳ್ಳಿ ದೇವೇಂದ್ರ ಒಂದು ಮನೆಯ ಮುಂದೆ ನಿಂತು ಬಾಗಿಲು ತಟ್ಟಿದ ಬಾಗಿಲು ತೆರೆದುಕೊಂಡಿತು ಒಳಗೆ ಹೋದ ದೇವೇಂದ್ರ 10 ನಿಮಿಷದಲ್ಲಿ ಹೊರಗೆ ಬಂದ ದೇವೇಂದ್ರನ ಕೈಲಿ ಒಂದು ಕವರ್ ಇತ್ತು. ಅಯ್ಯೋ.......... ಪತ್ರಿಕೆ ಪ್ರಿಂಟ್ ಆಗೋಕೆ ರೆಡಿಯಾಗಿದೆ ಒಂದೇ ಒಂದು ಪೋಟೋ ಬಂದ್ರೆ ಸಾಕು ಪತ್ರಿಕೆ ಪೂರ್ಣ ಬಾತ್ಮಿದಾರರು ದೇವೇಂದ್ರನ ದಾರಿ ಕಾಯುತ್ತಾ ಇದ್ದಾರೆ ಬೆಳಿಗ್ಗೆ ಹೋದ ದೇವೇಂದ್ರ ಇನ್ನು ಬರಲಿಲ್ಲ ಬಾತ್ಮಿದಾರರಿಗೆ ಚಿಂತೆಯಾಗಿದೆ ............. ಅದೇ ಹೊತ್ತಿಗೆ ದೇವೇಂದ್ರ ಕಚೇರಿ ಪ್ರವೇಶಿಸಿದ ಬಂದವನೇ ಜೊತೆಗೆ ತಂದಿದ್ದ ಪೋಟೋ ಬ್ಲಾಕ್ ಮುದ್ರಣಕ್ಕೆ ಕೊಟ್ಟು ತನ್ನ ಚೇರ್ ನಲ್ಲಿ ಕುಳಿತು ತುಟಿಗೆ ಸಿಗರೆಟ್ ಅಂಟಿಸಿ ಬೆಂಕಿ ತಗುಲಿಸಿದ ,,,,,,, ಸಿಗರೇಟಿನ ಹೋಗೆ ಸುರುಳಿಯಾಗಿ ಗಾಳಿಯಲ್ಲಿ ಲಿನವಾಗುತ್ತಾ ಇತ್ತು ಅತ್ತ ಪತ್ರಿಕೆ ಪ್ರಕಟವಾಗುತ್ತಾ ಇತ್ತು ವೆಂಕಟೇಶ್ ನಿಗೆ ಇನ್ನು ಪೂರ್ಣ ಗುಣವಾಗಿಲ್ಲ ಇನ್ನೂ ಜ್ವರ ಹಾಗೆಯೇ ಇದೆ ಮೈ ಸುಡುತ್ತಾ ಇದೆ ಮೀರಾ ಮಗನ ಆರೈಕೆ ಮಾಡೋದರಲ್ಲಿ ಮಗ್ನಗೊಂಡಿದ್ದಾಳೆ ಪ್ರೇಮ ಶಾಲೆಯಿಂದ ಬಂದು ಅಣ್ಣನ ಪಕ್ಕದಲ್ಲಿ ಸುಮ್ಮನೆ ಕುಳಿತುಕೊಂಡಳು ಮೀರಾ ಅಡುಗೆ ಮನೆ ಸೇರಿಕೊಂಡಳು ಮೀರಾ ತುಂಬಾ ಸಂತೋಷಗೊಂಡಿದ್ದಾಳೆ ದೇವೇಂದ್ರ ಕುಡಿಯೋದನ್ನು ಬಿಟ್ಟೆ ಅನ್ನೋ ಆ ಶಬ್ದ ಮೀರಾಳ ಕಿವಿಯಲ್ಲಿ ಸಂಗಿತದಂತೆ ಭಾಸವಾಗುತ್ತಿದೆ ಗಂಡ ಮಕ್ಕಳು ತಾನು ವ್ಹೌ ಎಂತಹ ಸುಂದರ ದೃಶ್ಯ ಕುಣಿದಾಡಬೇಕು ಅನ್ನಿಸುತ್ತಿದೆ ಮನದಲ್ಲೇ ದೇವರ ಹೆಸರು ಹೇಳುತ್ತಾ ಗಂಡನಿಗೆ ಇಷ್ಟವಾದ ಚಿಕನ್ ಮಸಾಲಾ ಮಾಡುತ್ತಿದ್ದಾಳೆ ನಿಮಿಷ ನಿಮಿಷಕ್ಕೂ ಅವಳ ಕಣ್ಣುಗಳು ಬಾಗಿಲಿನತ್ತ ಹೋಗುತ್ತಿದೆ ರಾತ್ರಿಯಾಗಲು ಆಯಿತು ಗಂಡ ಇನ್ನೂ ಮನೆಗೆ ಬರಲಿಲ್ಲ ಅಂತ ಚಿಂತೆ ಮತ್ತೇನಾದರೂ ಕೊಟ್ಟ ಮಾತು ತಪ್ಪಿ ಕುದಿದುಬಿಡುತ್ತಾರೆ ಅನ್ನೋ ಹೆದರಿಕೆಯಿದ್ದರೂ ಇವತ್ತು ದೇವೇಂದ್ರನ ಧ್ವನಿಯಲ್ಲಿದ್ದ ಆ ಸ್ಪಷ್ಟತೆ ಅವರ ಮಾತನ್ನು ನಂಬುವಂತೆ ಮಾಡಿತು ಅಡುಗೆ ಕಾರ್ಯ ಮುಗಿಸಿ ಮತ್ತೆ ಮಗನ ಬಳಿಯಲ್ಲಿ ಬಂದು ಕುಳಿತುಕೊಂಡು ಕತೆ ಹೇಳಲು ಆರಂಬ ಮಾಡಿದಳು ಪತ್ರಿಕೆ ಪ್ರಕಟ ಕಾರ್ಯ ಮುಗಿಸಿಕೊಂಡ ದೇವೇಂದ್ರ ಒಮ್ಮೆ ಕಾಳಿಂಗ ನಾಗನನ್ನು ಕೈಲಿ ಹಿಡಿದು ಉದ್ಗರಿಸಿದ “ಒಂದು ಹನಿ ಮಸಿ ಕೋಟಿ ಜನಕ್ಕೆ ಬಿಸಿ “ಹಃ ಹಃ ಹಃ ಗಹಗಹಿಸಿ ನಗುತ್ತಾ.. ನಾಳೆಯಿಂದ ಗದಗ ಜಿಲ್ಲೆಯಲ್ಲೊಂದು ಹೊಸ ಇತಿಹಾಸದ ಆರಂಬ ಕರ್ನಾಟಕದ ದುಷ್ಟರ ಪಾಲಿಗೆ ಕಾಳಿಂಗ ನಾಗ. ಬಾತ್ಮಿದಾರರು ಹಂಚಿಕೆದಾರರು ಮುದ್ರಣಕಾರರು ಯಲ್ಲರನ್ನು ಸೇರಿಸಿಕೊಂಡು ಕೆಲವು ಯಚ್ಚರಿಕೆಯನ್ನು ಕೊಟ್ಟು ಪತ್ರಿಕೆಯ ಮರು ಮುದ್ರಣ ಮಾಡಬೇಕು ಅಂತ ಅನ್ನಿಸಿದರೆ ನನ್ನ ಅಪ್ಪಣೆಗಾಗಿ ಕಾಯದೇ ಮುದ್ರಿಸಿ ಹಂಚಿರಿ ಎಂದು ತಾಕಿತು ಮಾಡಿದ ಬಾತ್ಮಿದಾರರು ಮಾಡಬೇಕಾದ ಕಾರ್ಯಗಳ ಕುರಿತು ಸ್ವಲ್ಪ ಸಮಾಲೋಚಿಸಿದ ನಂತರ ಪತ್ರಿಕೆಯನ್ನು ಹಂಚಿಕೆಗಾಗಿ ಹಸ್ತಾಂತರಿಸಿ ಮತ್ತೊಂದು ಸಿಗರೇಟನ್ನು ತುಟಿಗಂಟಿಸಿ ದಂ ಎಳೆದು ಸುರುಳಿ ಸುರುಳಿಯಾಗಿ ಹೋಗೆ ಬಿಟ್ಟ ದೇವೇಂದ್ರನ ಬಾಯಿಂದ ಸುರುಳಿಯಾಗಿ ಹೋಗುತ್ತಿರುವ ಹೋಗೆ ರೂಂ ತುಂಬಾ ತುಂಬಿಕೊಂಡಿತು ಹೀಗೆ ಆಲೋಚನೆಯಲ್ಲಿ ಮುಳುಗಿಹೋಗಿದ್ದ ದೇವೇಂದ್ರ ತಟ್ಟನೆ ಯಚ್ಚರಗೊಂಡ. ವೆಂಕಟೇಶ್ ನಿನ್ನೆಯಿಂದ ಜ್ವರದಿಂದ ಬಳಲುತ್ತಿದ್ದಾನೆ ಈಗ ಹೇಗಿದ್ದಾನೋ ಮನೆಯ ನೆನಪಾಗಿ ಮಲೆದ್ದು ಮತ್ತೊಂದು ಸಿಗರೆಟ್ ಅಂಟಿಸಿ ಬಿರಬಿರನೆ ಹೆಜ್ಜೆ ಹಾಕಿದ.

ಮುಂದಿನ ಸಂಚಿಕೆಯಲ್ಲಿ

Friday, May 25, 2018

ಇಂದು "ರೂಪವತಿ" ಗೆ ಬಿಡುವು ಕೊಡುವಿರಾ?

ಕ್ಷಮಿಸಿ ಗೆಳೆಯರೆ

ಇವತ್ತು ಬೆಜಾರಾಗಿದೆ ಟೈಪ್ ಮಾಡೊಕೆ ಮೂಡ್ ಇಲ್ಲ 
ಆ ಕಾರಣ ಇವತ್ತು "ರೂಪವತಿ" ಗೆ ಬಿಡುವು ಕೊಡ್ತಿರಿ ಅಂದುಕೊಂಡಿದ್ದೆನೆ 
ನಾಳೆಯಿಂದ ಎಂದಿನಂತೆ "ರೂಪವತಿ" ನಿಮ್ಮ‌ಮಡಿಲಿಗೆ ಬರುತ್ತಾಳೆ 

ರಾ ದೇ ಕಾರಭಾರಿ
9663082890 

Thursday, May 24, 2018

ಅತಿ ಬೇಗನೆ ಬರುತ್ತಿದ್ದಾಳೆ ಕಥಾನಾಯಕನ ಜೀವನದಲ್ಲಿ ರೂಪವತಿ ತಪ್ಪದೆ ಓದಿ "ರೂಪವತಿ"

ಅತಿ ಬೇಗನೆ ಬರುತ್ತಿದ್ದಾಳೆ ಕಥಾನಾಯಕನ ಜೀವನದಲ್ಲಿ ರೂಪವತಿ 
ತಪ್ಪದೆ ಓದಿ 

"ರೂಪವತಿ"