ರೂಪವತಿ : ಸಂಚಿಕೆ - 8
ದೇವೇಂದ್ರ ಎದ್ದು ಸ್ನಾನ ಮಾಡಿ ದೇವರ ಕೋಣೆಗೆ ಹೋದ ಪೂಜೆ ಮುಗಿಸಿ ಹೊರಬರುವ ಹೊತ್ತಿಗೆ ಬಾತ್ಮಿದಾರರು ಮನೆಯಲ್ಲಿ ಬಂದು ದೇವೇಂದ್ರನ ದಾರಿ ಕಾಯುತ್ತಾ ಇದ್ದರು ನಿನ್ನೆ ಕುಡಿತದ ನಶೆ ಹೆಚ್ಚಾಗಿ ಮಲಗಿದ್ದು ಯ ಚ್ಚರವಾಗಿದ್ದು ಸರಿ ಮದ್ಯಾನ 12 ರ ಸುಮಾರಿಗೆ. ದೇವರ ಕೋಣೆಯಿಂದ ಹೊರಬಂದು ತನ್ನ ಚೇರ್ ಮೇಲೆ ಕುಳಿತು ತುಟಿಗೆ ಸಿಗರೆಟ್ ಅಂಟಿಸಿ ಬಾತ್ಮಿದಾರರ ಜೊತೆ ಮಾತಿಗಿಳಿದ (ಬಾತ್ಮಿದಾರ) ದೇವೇಂದ್ರ ರವರೇ ಮುಂಜಾನೆಯಿಂದ ಇಡಿ ಜಿಲ್ಲೆಯ ಯಲ್ಲ ಪುಸ್ತಕ ಮಳಿಗೆಗಳಿಂದ ಪತ್ರಿಕೆಗಳು ಒಂದು ಉಳಿಯದಂತೆ ಮಾರಾಟವಾಗಿವೆ (ದೇವೇಂದ್ರ) ತುಂಬಾ ಸಂತೋಷದ ಸಂಗತಿ ಜಿಲ್ಲೆಯಲ್ಲಿ ಮೊದಲ ಬಾರಿ ಒಂದು ಚಿಕ್ಕ ಪತ್ರಿಕೆಯ ಸಾಧನೆ ಹಃ ಹಃ ಹಃ (ಬಾತ್ಮಿದಾರ) ಆದರೆ ಮತ್ತೊಂದು ವಿಷಯ ಯಲ್ಲ ಪ್ರತಿಗಳು ಮಾರಾಟವಾಗಿದ್ದರೂ ತುಂಬಾ ಜನರಿಗೆ ವಿಷಯ ಗೊತ್ತಾಗಿಲ್ಲ (ದೇವೇಂದ್ರ) ಇದು ಹೇಗೆ ಸಾದ್ಯ (ಯಲ್ಲ ಪುಸ್ತಕ ಮಳಿಗೆಗಳಿಂದ ಇರುವ ಯಲ್ಲ ಪ್ರತಿಗಳು ಒಬ್ಬನೇ ವ್ಯಕ್ತಿ ಕೊಂಡು ಹೋದ ಅಂತ ನಮಗೆ ಮಾಹಿತಿ ಬಂದಿದೆ, ಪತ್ರಿಕೆಯಲ್ಲಿ ಬಂದ ಶಾಸಕರ ವರದಿ ಜನರಿಗೆ ಗೊತ್ತಾಗಿ ಓದಬೇಕು ಅಂತ ಪ್ರತಿಗಳನ್ನು ಹುಡುಕುತ್ತಾ ಇದ್ದಾರೆ ಆದರೆ ಪ್ರತಿಗಳು ಸಿಗುತ್ತಾ ಇಲ್ಲ. ಮರು ಮುದ್ರಣವಾಗುತ್ತಾ ಇದೆ ಇನ್ನು ಅರ್ದ ಘಂಟೆಯಲ್ಲಿ ಪ್ರತಿಗಳು ಮುದ್ರನಗೊಳ್ಳುತ್ತೆ (ದೇವೇಂದ್ರ) ಶಹಬ್ಬಾಸ್ ಒಳ್ಳೆ ಕೆಲಸ ಮಾಡಿದ್ರಿ ಪತ್ರಿಕೆ ಮತ್ತೆ ಯಲ್ಲ ಮಳಿಗೆಗಳಿಗೂ ಕಳಿಸಿಬಿಡಿ (ಬಾತ್ಮಿದಾರ) ಆದ್ರೆ ದೇವೇಂದ್ರ ರವರೆ ಆ ವ್ಯಕ್ತಿ ಮತ್ತೆ ಬಂದು ಪತ್ರಿಕೆ ಕೊಂಡು ಹೋಗಿ ಬಿಟ್ಟರೆ ಏನು ಮಾಡೋದು (ದೇವೇಂದ್ರ) ಅದು ನಿಜ ಮುದ್ರಣಗೊಂಡ ಪ್ರತಿಗಳನ್ನು ಮಳಿಗೆಗಳಿಗೆ ಸಾಗಿಸಿ ಮತ್ತೆ ಮರುಮುದ್ರಣ ಮಾಡಿ ಮತ್ತೊಮ್ಮೆ ಮರು ಮುದ್ರಣಗೊಂಡ ಪ್ರತಿಗಳನ್ನು ನೇರ ಇಲ್ಲಿಗೆ ತಗೆದುಕೊಂಡು ಬನ್ನಿ ಏನಾದ್ರೋ ಆಲೋಚನೆ ಮಾಡೋಣ. ಬಾತ್ಮಿದಾರರು ದೇವೇಂದ್ರ ಸೂಚಿಸಿದ ಕೆಲಸದಲ್ಲಿ ತಲ್ಲಿನರಾಗಲು ಧಾವಿಸಿದರು ದೇವೇಂದ್ರ ಮತ್ತೊಂದು ಸಿಗರೇಟಿಗೆ ಬೆಂಕಿ ತಗುಲಿಸಿದ. ದೇವೇಂದ್ರ ತುಂಬಾ ಆಲೋಚನೆ ಮಾಡುತ್ತಾ ಇದ್ದಾನೆ ಪತ್ರಿಕೆ ಜನರ ಕೈಗೆ ತಲುಪಬೇಕಾದರೆ ಏನು ಮಾಡಬೇಕು ಅಯ್ಯೋ ಆಲೋಚನೆ ಮಾಡಿ ಮಾಡಿ ಸಾಕಾಯ್ತು ಸಿಗರೇಟಿನ ತುಂಡುಗಳು Ash Tray ನಲ್ಲಿ ತುಂಬುತ್ತಾ ಇದೆ ಸಿಗರೇಟಿನ ಹೋಗೆ ಕೋಣೆತುಂಬಾ ತುಂಬಿರುವ ಕಾರಣ ಕೋಣೆ ಮಂದವಾಗಿ ಕಾಣುತ್ತಾ ಇದೆ ದೇವೇಂದ್ರ ಏನೋ ಆಲೋಚನೆ ಮಾಡಿಕೊಂಡು ಜಗತ್ತನ್ನೇ ಗೆದ್ದುಕೊಂದಂತೆ ಗಹಗಹಿಸಿ ನಗುತ್ತ ಪೇಪರ್ ಪ್ಯಾಡ್ ಮೇಲೆ ಏನೋ ಬರೆಯಲು ಆರಂಬ ಮಾಡಿದ ಅರ್ದ ಘಂಟೆ ಬರೆದಾದ ಮೇಲೆ ಬರೆದ ಆ ಕಾಗದವನ್ನು ದಿಟ್ಟಿಸಿ ನೋಡಿ “ಗದಗ ಜಿಲ್ಲಾ ಪತ್ರಿಕಾ ರಂಗದಲ್ಲೊಂದು ಹೋದ ಪರ್ವದ ಆರಂಬ” ಮತ್ತೆ ನಕ್ಕು ಮತ್ತೊಂದು ಸಿಗರೇಟು ಅಂಟಿಸಬೇಕು ಅನ್ನುವಷ್ಟರಲ್ಲಿ ಮನೆ ಮುಂದೆ ವಾಹನವೊಂದು ಬಂದು ನಿಂತಿತು. ದೇವೇಂದ್ರ ವಾಹನದತ್ತ ದೃಷ್ಟಿ ಹಾಯಿಸಿದ ನಮ್ಮ ಕಾರ್ಯಾಲಯದ ಸಿಬ್ಬಂದಿ ಪ್ರಕಟಗೊಂಡ ಮೂರನೇ ಮುದ್ರಣದ ಪ್ರತಿಗಳ ಬಾಕ್ಸ್ ಅನ್ನು ತಂದಿದ್ದರು. ದೇವೇಂದ್ರ ಸಿಗರೇಟನ್ನು ಬಿಸ್ಹಾಕಿ ಹೊರಬಂದ ಜೊತೆಗೆ ಬಂದಿದ್ದ ಬಾತ್ಮಿದಾರರು ಏನೋ ಸಾಧನೆ ಮಾಡಿ ಜಯಿಸಿದ ಹಾಗೆ ಮಂದಹಾಸದಿಂದ ಇದ್ದರು, (ಬಾತ್ಮಿದಾರ) ದೇವೇಂದ್ರ ರವರೆ ಪರ್ತಿಕೆ ಎರಡನೇ ಮುದ್ರಣ ಮತ್ತೆ ಯಲ್ಲ ಮಳಿಗೆಗಳಿಗೆ ಹೋಗಿದೆ ಮೂರನೇ ಮುದ್ರಣ ಇಲ್ಲಿ ತಂದಿದ್ದೇವೆ ಈಗ ಹೇಳಿ ಇದನ್ನು ಏನು ಮಾಡೋಣ? (ದೇವೇಂದ್ರ) ನೋಟ್ ಪ್ಯಾಡ್ ನಲ್ಲಿ ಬರೆದುಕೊಂಡ ಸಂಗತಿಗಳನ್ನು ಮತ್ತೊಮ್ಮೆ ನೋಡಿ ಮುಗುಳ್ನಕ್ಕು ವರದಿಗಾರರಿಗೆ ತೋರಿಸಿದ ಕೆಂಪು ಇಂಕ್ ನಿಂದ ನಾಟ್ ಪ್ಯಾಡ್ ಮೇಲೆ ಬರೆದಿತ್ತು “ಗದಗ ಜಿಲ್ಲಾ ಪತ್ರಿಕಾ ರಂಗದಲ್ಲೊಂದು ಹೋದ ಪರ್ವದ ಆರಂಬ” (ಬಾತ್ಮಿದಾರ) ದೇವೇಂದ್ರ ರವರೆ ತುಂಬಾ ಸಂತೋಷ ಆದರೆ ಇದು ಹೇಗೆ ಅಂತ ಸ್ವಲ್ಪ ಬಿಡಿಸಿ ಹೇಳಿ (ದೇವೇಂದ್ರ) ಇವತ್ತು ಯಲ್ಲ ಜನರಿಗೆ ಪತ್ರಿಕೆ ಸೇರೋ ಹಾಗೆ ನಾವೆಲ್ಲಾ ಸೇರಿ ಒಂದು ಹೊಸ ಸಾಹಸ ಮಾಡಬೇಕು, ಪ್ರತಿಯೊಬ್ಬರೂ ಪರ್ರಿಕೆಗಳನ್ನು ಹಾಕ್ಕೊಂಡು ಇಡಿ ಜಿಲ್ಲೆಯ ಪ್ರತಿಯೊಂದು ಪಾನ್ ಶಾಪ್ (ಬಿಡಾ ಅಂಗಡಿ) ಗಳಿಗೆ ಕೊಡಬೇಕು, ಇಲ್ಲಿವರೆಗೂ ನಾವು ಪ್ರತಿ ಮಾರಾಟಕ್ಕೆ 1೦% ಕಮಿಷನ್ ಕೊಡುತ್ತಾ ಇದ್ದೆವು ಈಗ ಅದನ್ನು 25% ಹೆಚ್ಚು ಮಾಡಿ ಪ್ರತಿ ಬಿಡಾ ಅಂಗಡಿಗಳಿಗೆ ಕೊಡಿ, ಪ್ರತಿಗಳು ಮಾರಾಟವಾದ ಬಳಿಕ ಹಣ ಕೊಡೋಕೆ ಹೇಳಿ ಪತ್ರಿಕೆ ತಾನಾಗೇ ಜನರ ಬಳಿಗೆ ತಲುಪುತ್ತೆ. ಇಡಿ ಜಿಲ್ಲೆಯನ್ನು ಜಾಲಾಡಿ ಪ್ರತಿಗಳನ್ನು ಕೊಂಡು ನಾಶಮಾಡೋದು ಆಗದ ಮಾತು ಹಾಗೊಂದು ವೇಳೆ ಅಂತಹ ಸಾಹಸ ಮಾಡಿದರೂ ಸಹ ಎಲ್ಲಿ ಎಲ್ಲಿ ಪ್ರತಿಗಳು ಮಾರಾಟವಾಗುತ್ತಾ ಇದೆ ಅಂತ ಆಲೋಚಿಸುವುದರೊಳಗೆ ಪತ್ರಿಕೆಗಳನ್ನು ಜನ ಓದಿರುತ್ತಾರೆ (ಬಾತ್ಮಿದಾರ) ದೇವೇಂದ್ರ ರವರೆ ಒಳ್ಳೆ ಸೂಚನೆ ಖಂಡಿತ ಈ ತಂತ್ರ ಕೆಲಸ ಕೊಡುತ್ತೆ (ದೇವೇಂದ್ರ) ಹಾಗಾದ್ರೆ ಇನ್ನು ತಡ ಮಾಡಬೇಡಿ ಹೋಗಿ ನಿಮಗೆ ಬೇಕಾದವರನ್ನು ಸೇರಿಸಿ ಅವರ ಜೊತೆ ಸಹ ಪತ್ರಿಕೆ ಹಂಚಿಕೆ ಮಾಡೋಕೆ ಹೇಳಿ, ಸಮಯ ಬಂದರೆ ನಾಲ್ಕನೆಯ ಮುದ್ರಣ ಕೂಡ ಮಾಡೋಣ “ಕಾಳಿಂಗ ನಾಗ” ವಾರ ಪತ್ರಿಕೆ ಕೇವಲ ಜಿಲ್ಲೆಯಲ್ಲಷ್ಟೇ ಅಲ್ಲ ಇಡಿ ಕರ್ನಾಟಕಕ್ಕೆ ಸಿಂಹ ಸ್ವಪ್ನ ವಾಗಬೇಕು ದೇವೇಂದ್ರ ಸಿಗರೆಟ್ ತೆಗೆದು ತುಟಿಗಂಟಿಸಿ ಅದಕ್ಕೆ ಬೆಂಕಿ ತಗುಗಿಸಿದ. ಹೆಂಡತಿಯನ್ನು ಕೂಗಿ ಮೀರಾ.. ನನಗೆ ಸ್ವಲ್ಪ ಹೊರಗಡೆ ಕೆಲಸ ಇದೆ ನಾನು ಹೋಗಿ ಬರುವೆ ದೇವೇಂದ್ರ ಹೆಂಡತಿಯ ಉತ್ತರಕ್ಕೂ ಕಾಯದೆ ಸರಸರನೆ ಹೊರನಡೆದ ಸ್ವಪ್ನ ಬಾರ್ ಮನೆಯ ತುಂಬಾ ಸಮೀಪಕ್ಕೆ ಇರುವ ದೇವೇಂದ್ರನ ಇಷ್ಟದ ಸರಾಯಿ ಅಡ್ಡಾ, ದೇವೇಂದ್ರ ಕುಳಿತು ಒಂದು ಕ್ವಾಟರ್ ಓಲ್ಡ್ ಮಂಕ್ ಆರ್ಡರ್ ಮಾಡಿದ ಜೊತೆಗೆ ಒಂದು ಪ್ಯಾಕೆಟ್ ಚಾರ್ ಮಿನಾರ್, ಪಾಕೆಟ್ ನಲ್ಲಿ ಉಳಿದಿದ್ದ ಒಂದೇ ಸಿಗರೇಟಿಗೆ ಬೆಂಕಿ ತಗುಲಿಸಿ ಆಲೋಚನೆಯಲ್ಲಿ ಲಿನವಾದ, ಮುಂದಿನ ವಾರದ ಮುದ್ರಣಕ್ಕಾಗಿ ಹಾಟ್ ನ್ಯೂಸ್ ಯಾವುದು, ಈ ವಾರ ಶಾಸಕನ ಹಣೆಬರಹ ಗೊತ್ತಾಗುತ್ತೆ ಮುಂದಿನ ವಾರ.................... ಹೀಗೆ ಆಲೋಚನೆ ಮಾಡುತ್ತಿರುವಾಗಲೇ ಸರ್ವರ್ ಬಂದು ಗ್ಲಾಸ್ ಮತ್ತು ಸಿಸೆಯನ್ನು ಟೇಬಲ್ ಮೇಲಿಟ್ಟ.
ಮುಂದಿನ ಸಂಚಿಕೆಯಲ್ಲಿ

No comments:
Post a Comment