ಶಾಲೆಯಿಂದ ಬಂದ ವೆಂಕಟೇಶ್ ಏನು ಆಗುತ್ತಿದೆ ಅಂತ ಅರಿಯೋ ಮೊದಲೇ ಹೊಡೆತಗಳ ಮೇಲೆ ಹೊಡೆತ ಬಿಳೋಕೆ ಆರಂಬವಾಯಿತು ಶಾಲೆಯಿಂದ ಅರ್ದ ಘಂಟೆ ತಡವಾಗಿ ಬಂದಿದ್ದು ಈ ಅವಾಂತರಕ್ಕೆ ಕಾರಣ ಬಿಡಿಸಲು ಬಂದ ಮೀರಾ ಕೂಡ ಹೊಡೆತಕ್ಕೆ ಬಲಿಯಾದಳು ತಂಗಿ ಪ್ರೇಮ ಒಂದು ಮೂಲೆಯಲ್ಲಿ ಅಡಗಿ ಕುಳಿತುಕೊಂಡಿದ್ದಳು ಅವಳು ಅಳುವ ಶಬ್ದ ಕೂಡ ಹೊರಗೆ ಬರುತ್ತಿಲ್ಲ ಭೀಕರ ಘಟನೆ ನೋಡನೋಡುವಷ್ಟರಲ್ಲಿ ಯಲ್ಲರ ಮೈಮೇಲೆ ಬಾಸುಂಡೆಗಳು ಶಾಂತವಾಯಿತು ಮನೆ ಒಳಗೊಳಗೇ ಅಳುತ್ತಿರುವ ಮೀರಾ ಮತ್ತು ಮಕ್ಕಳು ಅಳುವ ಸದ್ದು ಹೊರಬಂದರೆ ಯಲ್ಲಿ ಮತ್ತೆ ಹೊಡೆತ ಬಿಳುತ್ತೆ ಎಂಬ ಹೆದರಿಕೆ ಆ ಸದ್ದನ್ನು ಮುಳುಗಿಸಿಬಿತ್ತಿತ್ತು ರಾತ್ರಿ ಕಳೆದು ಬೆಳಕಾಯಿತು ನಿನ್ನೆ ಬರುವಾಗ ಮಕ್ಕಳಿಗಾಗಿ ದೇವೇಂದ್ರ ತಂದ ತಿನಿಸುಗಳು ನಶೆಯಲ್ಲಿ ನೆನಪಾಗದೆ ಬ್ಯಾಗ್ ನಲ್ಲಿ ಹಾಗೆ ಇದ್ದವು ಬೆಳಿಗ್ಗೆ ಯದ್ದ ದೇವೇಂದ್ರ ಮಕ್ಕಳನ್ನು ತಬ್ಬಿಕೊಂಡು ಮುದ್ದುಮಾಡಿ ತಂದ ಮಿಟಾಯಿಗಳನ್ನು ಹಂಚಿದ ಮರುದಿನ ರವಿವಾರ ಶಾಲೆಗೆ ರಜೆ ದೇವೇಂದ್ರ ವೆಂಕಟೇಶ್ ನನ್ನು ಕರೆದುಕೊಂಡು ಬೆಳಿಗ್ಗೆನೆ ಪಕ್ಕದುರು ಬೆಳಧಡಿ ಗ್ರಾಮಕ್ಕೆ ತಮ್ಮ ಪ್ರಿತ್ರಾಜಿತ ಆಸ್ತಿ ನೋಡಲು ಕರೆದುಕೊಂಡು ಹೋದ ರಸ್ತೆಗುಂಟ ಕುಡಿಯುತ್ತ ಸಾಗಿತು ದೇವೇಂದ್ರನ ರತಯಾತ್ರೆ ಗದ್ದೆ ತಲುಪುವ ವೇಳೆಗೆ ಸಿಕ್ಕಾಪಟ್ಟೆ ನಷೆಯೇರಿತ್ತು ಬೀಸುವ ಗಾಳಿಯ ರಬಸಕ್ಕೆ ನಶೆ ಮತ್ತಷ್ಟು ಜೋರಾಯಿತು ಸಂಜೆಯಾಗಲು ಬಂತು ಅಪ್ಪ ರಾತ್ರಿಯಾಗುತ್ತೆ ಬಾಪಾ ಮನೆಗೆ ಹೋಗೋನು ಅಂತ ಹೇಳಿದ ತಪ್ಪಿಗೆ ಗದ್ದೆಯಲ್ಲಿ ಸಿಕ್ಕಾಪಟ್ಟೆ ಒದೆ ತಿಂದ ವೆಂಕಟೇಶ್ ಮತ್ತೆ ಹೊಡೆತ ಬಿಳುತ್ತೆ ಅನ್ನೋ ಹೆದರಿಕೆಯಲ್ಲಿ ಮರೆಯಾಗಿ ಅಡಗಿಕೊಂಡ ಸ್ವಲ್ಪ ಚಿರಾಡಿದ ದೇವೇಂದ್ರ ಹಾಗೆ ನಶೆಯಲ್ಲಿ ಮಲಗಿಬಿಟ್ಟ ಸಂಜೆ ಹೋಗಿ ರಾತ್ರಿಯಾಯಿತು ಸುತ್ತಲೂ ಎಷ್ಟು ದೂರ ಕಣ್ಣು ಹಾಯಿಸಿದರೂ ಒಂದೇ ಒಂದು ನರಪಿಳ್ಳೆಯೂ ಕಾಣಿಸಿಗುವುದಿಲ್ಲ ದೂರದೂರಕ್ಕೋ ಕತ್ತಲೆ ಯಲ್ಲಿಯಾದರೂ ಒಂದು ಬೆಳಕು ಕಂಡಿತು ಎಂದು ಹೆದರಿಕೆಯಲ್ಲೇ ಕಣ್ಣು ಹಾಯಿಸಿದ ವೆಂಕಟೇಶ್ ನಿಗೆ ಕಂಡಿದ್ದು ಬರಿ ಕತ್ತಲೋ ಕತ್ತಲು ಆ ನಿರ್ಜನ ಪ್ರದೇಶದ ಗದ್ದೆಯಲ್ಲಿ ನಾಲ್ಕನೇ ತರಗತಿಗೆ ಹೋಗುವ ವೆಂಕಟೇಶ್ ದಿಕ್ಕು ಇಲ್ಲದಂತವನಾದ ದೇವೇಂದ್ರನಿಗೆ ಇದರ ಪರಿವೇ ಇಲ್ಲ ಕುಡಿತದ ನಶೆ ಯಾವ ಯಚ್ಚರವು ಇರದಂತೆ ಮಾಡಿದೆ. ಕತ್ತಲಲ್ಲಿ ಸುತ್ತಲು ನೋಡುತ್ತಾ ಬಂದು ಅಪ್ಪನ ಪಕ್ಕದಲ್ಲಿ ಕುಳಿತುಕೊಂಡು ಕಣ್ಣು ಮಿಟುಕಿಸದೆ ಸುತ್ತಲು ನೋಡುತ್ತಾ ಕುಳಿತುಬಿಟ್ಟ ಚಿತ್ರ ವಿಚಿತ್ರ ಶಬ್ದಗಳು ನಾಯಿಗಳ ಗೋಳಾಟ ಗದ್ದೆಯ ಪಕ್ಕದಲ್ಲಿಯೇ ನಿರು ಹಾದುಹೋಗುವ ಕಾರಣ ಕಪ್ಪೆಗಳ ಕಲರವದ ಜೊತೆ ವಿಚಿತ್ರ ಶಬ್ದ ಆಗಾಗ ಕಿವಿಯಲ್ಲಿ ಹಾದು ಹೋದಂತೆ ಭಾಸವಾಗುವ ಹುಳುಗಳು ಕತ್ತಲೆ ಆಕಾಶದಲ್ಲಿ ಅಲ್ಲಿ ಇಲ್ಲಿ ಕಾಣುವ ಮಿಂಚು ಹುಳುವಿನ ಹೊಳಪು ತಣ್ಣನೆ ಬೀಸುವ ಗಾಳಿಯ ರಬಸಕ್ಕೆ ತತ್ತರಿಸಿ ಹೋದ ಆ ಎಳೆಯ ಜೀವ ಚಳಿ ತಾಳದೆ ಮುದುರಿಕೊಂಡು ಕುಳಿತು ಅಳುತ್ತಿರುವ ಆ ಭಯಾನಕ ದೃಷ್ಯ ಇದನ್ನೆಲ್ಲಾ ನೋಡಲು ಭಹುಷ್ಯ ಆ ದಿನ ಆ ದೇವರು ಕೂಡ ರಜೆ ತಗೊಂಡಂತೆ ತೋರಿತು ರಾತ್ರಿ ತುಂಬಾ ದೊಡ್ಡದಂತೆ ಕಂಡಿತು ಬೆಳಕೇ ಆಗುತ್ತಾ ಇಲ್ಲ ಇಡಿ ರಾತ್ರಿ ಸೋಲ್ಪವು ಕಣ್ಣು ಮಿಟುಕಿಸದೇಸುತ್ತಲು ದಿಟ್ಟಿಸುತ್ತ ಇದ್ದ ವೆಂಕಟೇಶ್ ಯಾವಾಗ ಕಣ್ಣು ಮುಚ್ಚಿದನೋ ಗೊತ್ತಾಗಲಿಲ್ಲ ನಿದ್ದೆಗೆ ಹೋಗಿದ್ದ ವೆಂಕಟೇಶ್ ತಟ್ಟನೆ ಯಚ್ಚರವಾಗಿ ಕಣ್ಣು ತೆರೆದು ನೋಡಿದ ಮುಂದೆ ಒಂದು ದೊಡ್ಡ ಬಿಳಿಯಾಕಾರ ನಿಂತಿರುವಂತೆ ಕಂಡು ಅಮ್ಮ ಅಂತ ಕಿಟಾರನೆ ಕಿರುಚಿಕೊಂಡು ಅಳಲು ಆರಂಬಿಸಿದ,, ಮಗ ಏನಾಯ್ತು ಏನಾಯ್ತು ಎನ್ನುತ್ತಾ ಮಗನ ಹತ್ತಿರ ಬಂದ ದೇವೇಂದ್ರ ಮಗನನ್ನು ತಬ್ಬಿಕೊಂಡು ಸಮಾಧಾನಗೊಲಿಸಿದ ಬೆಳಿಗ್ಗೆ ಯಚ್ಚರವಾಗಿ ಯದ್ದು ಬಹಿರ್ದಷೆಗೆ ಹೋಗಿ ಬರುತ್ತಾ ಇರುವ ಅದೇ ಸಮಯದಲ್ಲಿ ವೆಂಕಟೇಶ್ ಯಚ್ಚರಗೊಂಡು ಕಣ್ಣು ತೆರೆದ ತಕ್ಷಣ ಯಾವುದೋ ಆಕಾರ ಬರುತ್ತಿರುವಂತೆ ಭಾಸವಾಗಿ ಕಿಟಾರನೆ ಕಿರುಚಿಕೊಂಡಿದ್ದ ಮಗನನ್ನು ಸಮಾಧಾನಗೊಲಿಸಿದ ದೇವೇಂದ್ರ ಮಗನನ್ನು ಕರೆದುಕೊಂಡು ಸರಸರನೆ ಊರಿನತ್ತ ಹೆಜ್ಜೆ ಹಾಕಿದ ಊರು ತಲುಪುವ ಹೊತ್ತಿಗೆ ಆಕಾಶದಲ್ಲಿ ಸೂರ್ಯ ಹೊಳೆಯುತ್ತಿದ್ದ. ಗ್ರಾಮದ ಬಸ್ ನಿಲ್ದಾಣದಲ್ಲಿ ಅದಾಗಲೇ ಬೆಟಗೇರಿ ಗ್ರಾಮಕ್ಕೆ ಹೋಗುವ ಬಸ್ಸು ಸಿದ್ದವಾಗಿತ್ತು.
ಮುಂದಿನ ಸಂಚಿಕೆಯಲ್ಲಿ
ಮುಂದಿನ ಸಂಚಿಕೆಯಲ್ಲಿ

No comments:
Post a Comment